Input license here

ಇತ್ತೀಚಿನ ಪೋಸ್ಟ್‌ಗಳು

ಸಂಜೆ ಬೆಳಕಿನ ನಡುವೆ ಒಂಟಿ ದೀಪವ ಹಿಡಿದು

 ಸಂಜೆ ಬೆಳಕಿನ ನಡುವೆ ಒಂಟಿ ದೀಪವ ಹಿಡಿದು
ನಾನು ಹೊರಟಿದ್ದೆನೆ ನಿನ್ನ ಮನೆಗೆ;
ದೊರ ಪಯಣ ನೋವು ನನ್ನನಾವರಿಸಿಹುದು
ಗವಿಯ ಇನ್ನೋಂದು ಮುಖ ಕಾಣಲಿಲ್ಲ.

ಅದರಾಚೆಗೊಂದು ಉದ್ಯಾನವಿಹುದೆನ್ನುವರು
ಪನ್ನೀರ ಚಿಲುಮೆಗಳ ಬಳಸಿನಲ್ಲಿ;
ಹೆಜ್ಜೆಯಿಕ್ಕಿದೆ ನಾನು ಬರಿದೆ ಗೋಳಡುವೆನು
ಬೆಳ್ಳಿ ಬೆಳಕನು ಕಾಣುವಾಸೆಯಿಂದ.

ಒಣಮರದ ಮೇಲೊಂದು ಕಪ್ಪು ಹಕ್ಕಿಯು ಕುಳಿತು
ಹಳೆಯ ಹಾಡನು ಮತ್ತೆ ತೆರೆಯುತಿಹುದು;
ಪಯಣವನು ನಿಲ್ಲಿಸಲು ಐದಾರು ಸಲ ನಾನು
ಗುಹೆಯ ನಡುವಣ ಹಾದಿಯಲ್ಲಿ ನಿಂತೆ.

ಇನ್ನೊಂದು ಜೀವ ಕೈ ಹಿಡಿದು ಜೊತೆಗೊ ಬಂದು
ಬೆಳಕ ತೋರುವೆನೆಂದು ಹೇಳುತಿಹುದು;
ಹೊರ ಬಂದೆ, ಮಳೆಬಿಲ್ಲ ಕಂಡೆ ಬಲುದೂರದಲಿ
ಈ ಲೋಕ ಹೀಗೆಯೇ ಎಂದುಕೊಂಡೆ.

-ಕೆ ಎಸ್ ನರಸಿಂಹಸ್ವಾಮಿಯವರು

Post a Comment

0 Comments