ಸಂಜೆ ಬೆಳಕಿನ ನಡುವೆ ಒಂಟಿ ದೀಪವ ಹಿಡಿದು
ನಾನು ಹೊರಟಿದ್ದೆನೆ ನಿನ್ನ ಮನೆಗೆ;
ದೊರ ಪಯಣ ನೋವು ನನ್ನನಾವರಿಸಿಹುದು
ಗವಿಯ ಇನ್ನೋಂದು ಮುಖ ಕಾಣಲಿಲ್ಲ.
ಅದರಾಚೆಗೊಂದು ಉದ್ಯಾನವಿಹುದೆನ್ನುವರು
ಪನ್ನೀರ ಚಿಲುಮೆಗಳ ಬಳಸಿನಲ್ಲಿ;
ಹೆಜ್ಜೆಯಿಕ್ಕಿದೆ ನಾನು ಬರಿದೆ ಗೋಳಡುವೆನು
ಬೆಳ್ಳಿ ಬೆಳಕನು ಕಾಣುವಾಸೆಯಿಂದ.
ಒಣಮರದ ಮೇಲೊಂದು ಕಪ್ಪು ಹಕ್ಕಿಯು ಕುಳಿತು
ಹಳೆಯ ಹಾಡನು ಮತ್ತೆ ತೆರೆಯುತಿಹುದು;
ಪಯಣವನು ನಿಲ್ಲಿಸಲು ಐದಾರು ಸಲ ನಾನು
ಗುಹೆಯ ನಡುವಣ ಹಾದಿಯಲ್ಲಿ ನಿಂತೆ.
ಇನ್ನೊಂದು ಜೀವ ಕೈ ಹಿಡಿದು ಜೊತೆಗೊ ಬಂದು
ಬೆಳಕ ತೋರುವೆನೆಂದು ಹೇಳುತಿಹುದು;
ಹೊರ ಬಂದೆ, ಮಳೆಬಿಲ್ಲ ಕಂಡೆ ಬಲುದೂರದಲಿ
ಈ ಲೋಕ ಹೀಗೆಯೇ ಎಂದುಕೊಂಡೆ.
-ಕೆ ಎಸ್ ನರಸಿಂಹಸ್ವಾಮಿಯವರು
0 Comments