ಎಲ್ಲ ಅಳುತಿರುವಾಗ ನಾನು ನುಗುವುದು ಹೇಗೆ,
ಎದ್ದು ಹೋದೆನು ಮತ್ತುಸಂಜೆಯೊಳಗೆ...
ಜ್ವರ ಬಂದ ಮಗು ತೊಟ್ಟಿಲಲ್ಲಿ ಮಲಗಿರುವುದನು
ನಾ ಕಂಡೆ, ಅದರ ತುಟಿ ಅದುರುತ್ತಿತ್ತು.
ಹೊರಗೆ ನಡೆಯುತ್ತಿತ್ತು ಲೋಕಾಂತದ ಚರ್ಚೆ,
ಭಾಗಿಯಾಗದೆ ದೂರ ಕುಳಿತೆ ನಾನು;
ಸಮಸ್ಯೆಯೇ ಬೇರೆ,ಪರಿಹಾರ ಅಲ್ಲಿಗೆ ದೂರ
ಹಣೆಯಲ್ಲಿ ಬೆವರ ಹನಿ ಕಂಡು ಬಂತು.
ಸಂತಸದ ಹಾಡು ಇಲ್ಲಿಗೆ ದೂರ ಎನಿಸಿತ್ತು,
ಬೆಳಕು ಅರಿತು ಇರುಳು ತುಂಬಿಕೊಂಡು;
ನಕ್ಷತ್ರಗಳ ಚೆಲ್ಲಿ ಆಕಾಶ ಹೊಳೆದಿತ್ತು,
ತೇಲಿ ಬಂದಿತು ಯಾರ ಹಾಡೊ ಕಿವಿಗೆ.
ತಾಯಿ ಬಂದಳು ಬಳೀಗೆ, ಎತ್ತಿಕೊಂಡಳು ಮಗುವ
ಅದರ ತುಟಿಯನ್ನಿಟ್ಟು ತನ್ನ ಮೊಲೆಗೆ;
ಇರುಳು ಬೆಳೆಯಿತು, ನನಗೆ ನಿದ್ದೆಯೇ ಬರಲಿಲ್ಲ
ಅನುಭವವೊ ಕನಸೊ ಇದು ತಿಲೀಯಲಿಲ್ಲ .
-ಕೆ ಎಸ್ ನರಸಿಂಹಸ್ವಾಮಿಯವರು.
0 Comments