Input license here

ಇತ್ತೀಚಿನ ಪೋಸ್ಟ್‌ಗಳು

ಕೀಲಿಗೆಣ್ಣಿಯ ಬಿಟ್ಟು ಎಷ್ಟು ದಿನವಾಯಿತೋ !

 ಕೀಲಿಗೆಣ್ಣಿಯ ಬಿಟ್ಟು ಎಷ್ಟು ದಿನವಾಯಿತೋ !-
ತೊಟ್ಟಿಲಿನ ಕಿರಿಚು ಅಲ್ಲಿಂದಿಲ್ಲಿಗೆ.
ಅದೆ ತಾಯ ದನಿಯೆಂದು ಯಾರಿದಕೆ ಹೇಳಿದರೊ ?-
ಕಣ್ಣ ಚಾವಣಿ ಬಿತ್ತು ನಿದ್ದೆ - ಮಳೆಗೆ ;

ಮಗುವಿಗೆ ನಿದ್ದೆ ಬಂತು. ಇನ್ನೇಕೆ ತೂಗುವುದು ?
ಕಾರಣವ ಕೊಡಲಿಲ್ಲ ಹೆತ್ತ ಕರುಣೆ.
ಇಲ್ಲ, ತಗುಲಿದ ಗೋಡೆ ಇದನು ತಳ್ಳುವುದೆನಲು,
ಇಟ್ಟಿಗೆಗೆ ಬಂತು ಚಿನ್ನದ ಧಾರಣೆ.

ಕೊಂಡಿ ಕುಣಿಕೆ ಸುಭದ್ರ : ಸರಪಳಿಗಳಿದಬೇಕು,
ಇವೆಯಂತೆ ! ನಾಗೋಸ ನೀಲಗಗನ.
ಮಗು ಮಗ್ಗಲಾಗಿ ನಿದ್ದೆಯಲಿ ಅತ್ತಿರಬೇಕು,
ತೆರೆಯ ನೇವರಿಸುತಿದೆ ಮಂದ ಪವನ.

-ಕೆ ಎಸ್ ನರಸಿಂಹಸ್ವಾಮಿಯವರು.

Post a Comment

0 Comments