ನಾನು ನಿಂತರೆ ನಿಂತು, ನಾನು ನಡೆದರೆ ನಡೆದು
ನನ್ನ ಜೊತೆಗೂ ಬರುವುದೆನ್ನ ನೆರಳು;
ಇಲ್ಲಿ ನಾನೇ ವೀಣೆ, ಅದರ ತಂತಿ ಮಿಡಿದು
ಇಂಪ ಹೊರಚಲ್ಲುವುದು ನನ್ನ ಬೆರಳು.
ಅಗ್ನಿಪರ್ವತ ನಾನು ; ಪಕ್ಕದಲಿ ಮನೆಮಾಡಿ
ಅದರಂಚಿನಲಿ ಬೆಳೆವ ವೃಕ್ಷ ನಾನು ;
ಸಿಡಿಲಾಗಿ ಮಿಂಚಾಗಿ ನಾನೆ ಕಾಣಿಸಿಕೊಂಡು
ದಾರಿಯನು ತೋರುತಿಹ ಮನುಜ ನಾನು.
ಸೋಲು ಗೆಲುವುಗಳಲ್ಲಿ ಮುಂಬರಿಯುವೆನು ನಾನು,
ನಾನು ಅಂಜುವುದಿಲ್ಲ ಬಿರುಗಾಳಿಗೆ ;
ನನ್ನ ನಂಬಿಕೆಯಲ್ಲಿ ಅಡಿಯನಿಡುವೆನು ನಾನು,
ನಾನೆ ನಕ್ಷತ್ರ , ನೀಲಾಕಾಶ ನಾನೆ.
-ಕೆ ಎಸ್ ನರಸಿಂಹಸ್ವಾಮಿಯವರು.
0 Comments