ಸಂಗಮ
ಭಾವ ಬರುವನು ದೂರದೂರಿಂದ;
ಎಳೆಯಿತು ಪ್ರೇಮ.
ಅಕ್ಕ ಕಾದಿಹಳು ಒಳಬಾಗಿಲನ್ನೊರಗಿ;
ಅರಳಿತು ಕಣ್ಣು
ಸಂತಸದ ರಾತ್ರಿಯಲಿ
ಅಕ್ಕರೆಯ ಸೆರೆಯೊಳಗೆ
'ಭಾವ -ಅಕ್ಕ ' ಎಂದು ಬಿಡಿಸಿ ಕರೆದರೆ,ತಂಗಿ,
ಪ್ರೇಮಪುರಿಯಲಿ ಮಹಾಪಾಪಕರವದುವೆ
ಮಾತು ಹೂವಿನ ಮೇಲುಬಣ್ಣ;
ಭಾವ ಒಳಗಿನ ಮಧುರ ಮಕರಂದ
ಕವಿತೆಯ ಬಿಡಿಸಿ 'ಭಾವ ಇದು, ಭಾಷೆಯಿದು'
ಎನ್ನುವುದು ಕಟುಕತನ.
ಇದು ಕವಿತೆ.ಇವನು ಕವಿ ಎನ್ನುವವ ತಿಳಿಗೇಡಿ
ಕೊಡುವ ಕೈ ಕಾಣಿಸದೆ ಕೊಟ್ಟೊಡವೆಯಲಿ
ನನ್ನ ಹಾಡಿನ ಓದಲು ಸೇರಗೆಲ್ಲ ನಾನೆ!
- ಕೆ. ಎಸ್. ನರಸಿಂಹಸ್ವಾಮಿಯವರು.
0 Comments