Input license here

ಇತ್ತೀಚಿನ ಪೋಸ್ಟ್‌ಗಳು

ಎಲೆಲೆ! ದೇಪದ ಮಲ್ಲಿ,

 ಎಲೆಲೆ! ದೇಪದ ಮಲ್ಲಿ,
ಎದೆಯ ಕತ್ತಲೆಯಲ್ಲಿ
ಪದುಮ ದೀಪದ ಹಿಡಿದು
ಬಾಗಿ ನಿಂತು

ಕವಿಗಿನಿತೆ ಬೆಳಕಿನಲ್ಲಿ
ಎಂಬ ಕಿರುನಗೆಯಲ್ಲಿ
ಹಿಗ್ಗಿ ಹೂವಾಯ್ತಿಂತು
ಪ್ರಾಣ ತಂತು.

ನೀನೆ ಕಂಚಿನ ಬೊಂಬೆ ?
ಅಲ್ಲ ಮಿಂಚಿನ ಬೊಂಬೆ ?
ಹಂಬಲವನೆದೆಯೊಳಗೆ
ತುಂಬಿದೊಲುಮೆ.

ಎಲ್ಲಿತ್ತೊ ಒಂದು ದನಿ,
ಎಲ್ಲಿತ್ತೊ ಒಂದು ಬನಿ,
ನಿನ್ನಿಂದ ಹಾಡಾಯ್ತು
ಅಮೃತವಾಯ್ತು.

-ಕೆ ಎಸ್ ನರಸಿಂಹಸ್ವಾಮಿಯವರು

Post a Comment

0 Comments