ನಕ್ಕ ನಿಮಿಷಗಳಿಂದ ನಾನು ಮೌನಕೆ ಬಂದೆ,
ದೂರ ದೂರದ ಕನಸ ತುಂಬಿಕೊಂಡು;
ಯಾರೊ ಬಂದರು ಎಂದು ನನಗಿವಳು ಹೇಳೀದಳು,
ಮುತ್ತುಸಂಜೆಯ ಕಡೆಯ ನಿಮಿಷದಲ್ಲಿ.
ಯಾರು ಬಂದರು ಎಂದು ನನಗೆ ಹೊಳೆಯುತ್ತಿಲ್ಲ,
ಇವಳು ನಕ್ಕಳು ನನ್ನ ಕಡೆಗೆ ನೋಡಿ;
ನನ್ನನ್ನು ಬಲ್ಲ ಜನ ನನಗುಂಟು ಊರಿನಲಿ,
ತಿಳಿದಿಲ್ಲ ನನಗವರ ಇಂಗಿತಗಳು.
ಬಂದವರು ನನ್ನವರು ಎಂದು ತಿಳೀದಿದ್ದೇನೆ,
ದೂರದಲಿ ಹಲವು ದನಿ ಕಿವಿಗೆ ಬಿತ್ತು;
ಅವರು ಯಾರೇ ಇರಲಿ, ಅವರಿಗೊಳಿತನು ಬಯಸಿ,
ಕಾಯುವೆನು ಇದ್ದಲ್ಲೆ ಅವರಿಗಾಗಿ.
-ಕೆ ಎಸ್ ನರಸಿಂಹಸ್ವಾಮಿಯವರು
0 Comments