ಬೆಟ್ಟ ನಿಂತಿರುವುದೂ ಹೊಳೆ ಹರಿಯುತಿರುವುದೂ
ನನಗಾಗಿ ಅಲ್ಲವೆಂಬುದು ನನಗೆ ಗೋತ್ತು;
ನಾನು ಹುಟ್ಟುವ ಮೊದಲೆ ಹುಟ್ಟಿದುವು ಇವು, ಗೊತ್ತು-
ಪ್ರಶ್ನಿಸುವ ಅಧಿಕಾರ ಯಾರಿಗಿತ್ತು?
ನನ್ನ ಕೇಳಿದೆ ನೀನು ಹೊಳೆಯಾಳವೆಷ್ಟೆಂದು,
ಎಲ್ಲಿಂದ ತರಲಿ ನಾನುತ್ತರವನು?
ದಡದ ಬಳಿ ಆಳುದ್ದ; ತೆಪ್ಪ ಸರಿದಂತೆಲ್ಲ
ಹೆಚ್ಹುವುದದರ ಆಳ, ನನಗೆ ಗೊತ್ತು.
ಹೊಳೆಯ ವೇಗದ ಪ್ರಶ್ನೆಯನ್ನ ಕೇಲಿದೆ ನೀನು,
ಉತ್ತರವ ಹೊಂದಿಸುವೆನದಕೆ ನಾನು;
ನೀರ ವೇಗವೆ ಬೇರೆ, ತೆಪ್ಪದ ವೇಗವೆ ಬೇರೆ
ಅಳದಿ ಸರಿವ ಮರಳಿನ ವೇಗ ಬೇರೆ.
ಯಾವುದು ಹೊಳೆಯ ವೇಗ , ನನಗೆ ತಿಳಿಯದು ನೋಡಿ-
ನಿಮಗೆ ತಿಳಿದಷ್ಟನ್ನೆ ನನ್ನ ಹತ್ತಿರ ಹಾಡಿ.
- ಕೆ. ಎಸ್. ನರಸಿಂಹಸ್ವಾಮಿಯವರು.
0 Comments