Input license here

ಇತ್ತೀಚಿನ ಪೋಸ್ಟ್‌ಗಳು

ನಾ ಮಾಡಿದ ಕರ್ಮ ಬಲವಂತವಾದರೆ-ಪುರಂದರದಾಸರ ಕೀರ್ತನೆ

 ನಾ ಮಾಡಿದ ಕರ್ಮ ಬಲವಂತವಾದರೆ
ನೀ ಮಾಡುವುದೇನೋ ದೇವ

ಸಾಮಾನ್ಯವಲ್ಲಿದು ಬ್ರಹ್ಮ ಬರೆದ ಬರಹ
ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ

ಅತಿಥಿಗಳಿಗೆ ಅನ್ನ ಕೊಟ್ಟವನಲ್ಲ ಪರ
ಸತಿಯರ ಸಂಘಗಳ ಬಿಟ್ಟವನಲ್ಲ
ಮತಿಹೀನ ನಾನಾಗಿ ಮರುಳಾಗಿದ್ದೆನೊ ದೇವ
ಗತಿಯಾವುದಿನ್ನು ಗರುಡ ಗಮನ ಕೃಷ್ಣ

ಅನ್ನಪಾನಂಗಳಿಗೆ ಅಗ್ರಗಣ್ಯನಾಗಿ
ಸ್ನಾನ ಸಂಧ್ಯಾದಿ ಜಪ ತಪವ ನೀಗಿ
ದಾನವಾಂತಕ ನಿನ್ನ ಧ್ಯಾನವ ಮಾಡದೆ
ಶ್ವಾನನಂತೆ ಮನೆ ಮನೆ ತಿರುಗತಲಿದ್ದೆ

ಇನ್ನಾದರೂ ನಿನ್ನ ದಾಸರ ಸಂಘವಿತ್ತು
ಮನ್ನಿಸಿ ಸಲಹಯ್ಯ ಮನ್ಮಥ ಜನಕ
ಅನ್ಯರೊಬ್ಬರ ಕಾಣೆ ಆಧರಿಸುವರಿಲ್ಲ
ಪನ್ನಗಶಯನ ಪುರಂದರ ವಿಠ್ಠಲ

Post a Comment

0 Comments