Input license here

ಇತ್ತೀಚಿನ ಪೋಸ್ಟ್‌ಗಳು

ನಾಡಗೀತೆ

 

ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ |
ಜಯ್ ಸುಂದರ ನದಿ ವನಗಳ ನಾಡೆ,
 ಜಯ ಹೇ ರಸಋಷಿಗಳ ಬೀಡೆ |
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
 ಭಾರತ ಜನನಿಯ ತನುಜಾತೆ,
 ಜಯ ಹೇ ಕರ್ನಾಟಕ ಮಾತೆ |
ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ.
ಹಸುರಿನ ಗಿರಿಗಳ ಸಾಲೆ
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ,
 ಜಯ ಹೇ ಕರ್ನಾಟಕ ಮಾತೆ |
ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರ ಮಧ್ವರ ದಿವ್ಯಾರಣ್ಯ
 ರನ್ನ ಷಡಕ್ಷರಿ ಪೊನ್ನ
 ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸರ ಮಂಗಳಧಾಮ |
ಕವಿಕೋಗಿಲೆಗಳ ಪುಣ್ಯಾರಾಮ |
ನಾನಕ ರಾಮಾನಂದ ಕಬೀರರ
 ಭಾರತ ಜನನಿಯ ತನುಜಾತೆ,
 ಜಯ ಹೇ ಕರ್ನಾಟಕ ಮಾತೆ |
ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ;
  ಕೃಷ್ಣ ಶರಾವತಿ ತುಂಗಾ
  ಕಾವೇರಿಯ ವರರಂಗಾ.
ಚೈತನ್ಯ ಪರಮಹಂಸ ವಿವೇಕರ
 ಭಾರತ ಜನನಿಯ ತನುಜಾತೆ,
  ಜಯ ಹೇ ಕರ್ನಾಟಕ ಮಾತೆ |
ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ.
  ಹಿಂದು ಕ್ರೈಸ್ರ ಮುಸಲ್ಮಾನ
  ಪಾರಸಿಕ ಜೈನರುದ್ಯಾನ.
ಜನಕನ ಹೋಲುವ ದೊರೆಗಳ ಧಾಮ,
  ಗಾಯಕ ವೈಣಿಕರಾರಾಮ |
ಕನ್ನಡ ನುಡಿ ಕುಣಿದಾಡುವ ಗೇಹ |
ಕನ್ನಡ ತಾಯಿಯ ಮಕ್ಕಳ ದೇಹ |
ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ |
ಜಯ್ ಸುಂದರ ನದಿ ವನಗಳ ನಾಡೆ,
 ಜಯ ಹೇ ರಸಋಷಿಗಳ ಬೀಡೆ |
-ರಾಷ್ಟ್ರಕವಿ ಕುವೆಂಪು.                          

 

 

Post a Comment

0 Comments