Input license here

ಇತ್ತೀಚಿನ ಪೋಸ್ಟ್‌ಗಳು

ಬಸವಣ್ಣನವರ ಮಾತುಗಳು

 

  • ದೇವನೊಬ್ಬ; ನಾಮ ಹಲವು.
  • ಕಾಯಕವೇ ಕೈಲಾಸ.
  • ದಯೆಯಿಲ್ಲದ ಧರ್ಮವಾವುದಯ್ಯ; ದಯವೇ ಬೇಕು ಸಕಲ ಪ್ರಾಣಿಗಳಿಗೆಲ್ಲ. ದಯವೇ ಧರ್ಮದ ಮೂಲವಯ್ಯ.
  • ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಮುನಿಯಬೇಡ. ಅನ್ಯರಿಗೆ ಅಸಹ್ಯ ಪಡಬೇಡ. ತನ್ನ ಬಣ್ಣಿಸಬೇಡ. ಇದಿರ ಹಳಿಯಲು ಬೇಡ. ಇದೇ ಅಂತರಂಗ ಶುದ್ಧಿ; ಇದೇ ಬಹಿರಂಗ ಶುದ್ಧಿ.
  • ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ಮನದ ಸಂತೈಸಿಕೊಳ್ಳಿ.
  • ದೇವರು ಸತ್ಯದ ನಿತ್ಯಾವತಾರ.
  • ಅಯ್ಯಾ ಎಂದೆಡೆ ಸ್ವರ್ಗ; ಎಲವೋ ಎಂದೆಡೆ ನರಕ.
  • ಪುಣ್ಯ ಪಾಪಗಳೆಂಬುದು ತಮಿಷ್ಟ ಕಂಡಿರೇ. ಅಯ್ಯಾ ಎಂದೆಡೆ ಸ್ವರ್ಗ; ಎಲವೋ ಎಂದೆಡೆ ನರಕ.
  • ಬೇವಿನ ಬೀಜ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ, ಆಕಳ ಹಾಲನೆರೆದು, ಜೇನು ತುಪ್ಪವ ಹೊಯ್ದರೆ, ಸಿಹಿಯಾಗಬಲ್ಲದೆ, ಕಹಿಯಾಗಬಲ್ಲದೆ?
  • ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು. ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು. ನುಡಿದರೆ ಲಿಂಗ ಮೆಚ್ಚಿ ಅಹುದಹುದು ಎನ್ನಬೇಕು.
  • ಮಾತೆಂಬುದು ಜ್ಯೋತಿರ್ಲಿಂಗ! ಸ್ವರವೆಂಬುದು ಪರತತ್ವ. ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ; ಇಲ್ಲಿ ಸಲ್ಲುವರು ಅಲ್ಲಯೂ ಸಲ್ಲುವರಯ್ಯ; ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ.
  • ದೇವಲೋಕ ಮರ್ತ್ಯಲೋಕ ಬೇರೆ ಇಲ್ಲ. ಸತ್ಯ ನುಡಿಯುವುದೇ ದೇವಲೋಕ; ವಿಥ್ಯ ನುಡಿಯುವುದೇ ಮರ್ತ್ಯಲೋಕ.
  • ಆಚಾರವೇ ಸ್ವರ್ಗ; ಅನಾಚಾರವೇ ನರಕ.
  • ಪರಚಿಂತೆ ನಮಗೇಕಯ್ಯ? ನಮ್ಮ ಚಿಂತೆ ನಮಗೆ ಸಾಲದೇ? ಕೂಡಲ ಸಂಗಯ್ಯ ಒಲಿದಾನೋ, ಒಲಿಯನೋ ಎಂಬ ಚಿಂತೆ ಹಾಸಲುಂಟು ಹೊದೆಯಲುಂಟು.
  • ತಂದೆ ನೀನು, ತಾಯಿ ನೀನು, ಬಂಧು ನೀನು, ಬಳಗ ನೀನು. ಎನಗೆ ನೀನಲ್ಲದೆ ಮತ್ತಾರು ಅಲ್ಲವಯ್ಯ, ಕೂಡಲ ಸಂಗಮದೇವಾ, ಹಾಲಲ್ಲದ್ದು, ನೀರಲ್ಲದ್ದು.
  • ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ! ಸುತ್ತಿ ಸುಳಿದು ನೋಡದಂತೆ ಅಮಧಕನ ಮಾಡಯ್ಯ ತಂದೆ! ಮತ್ತೋಂದು ಕೇಳದಂತೆ ಕಿವುಡನ ಮಾಡಯ್ಯ ತಂದೆ! ನಿಮ್ಮ ಶರಣರ ಪಾದವಲ್ಲದ ಅನ್ಯ ವಿಷಯಕೇಳಸದಂತೆ ಇರಿಸು ಕೂಡಲ ಸಂಗಮದೇವ.
  • ಆಯುಷ್ಯ ತೀರಿದಲ್ಲದೆ ಮರಣವಿಲ್ಲ. ಭಾಗ್ಯ ತೀರದಲ್ಲದೆ ದಾರಿದ್ರ್ಯವಿಲ್ಲ.
  • ತನುವಿನ ಕೋಪ ತನ್ನ ಹಿರಿಯತನದ ಕೇಡು; ಮನದ ಕೋಪ ತನ್ನ ಅರುಹಿನ ಕೇಡು. ಮನೆಯೊಳಗಣ ಕಿಚ್ಚು ಮನೆಯ ಸುಟ್ಟಿತಲ್ಲದೆ; ನೆರೆಮನೆ ಬೇವುದೆ?
  • ಅರ್ಥರೇಖೆ ಇದ್ದಲ್ಲಿ ಫಲವೇನು? ಆಯುಷ್ಯರೇಖೆ ಇಲ್ಲದನ್ನಕ್ಕ?
  • ನುಡಿದರೆ ಮುತ್ತಿನ ಹಾರದಂತಿರಬೇಕು.
  • ಶೀಲವೇ ಹೊನ್ನ ಕಳಸವಯ್ಯ.
  • ಮಹಾತ್ಮರಿಗೆ ಮರಣವೇ ಮಹಾನವಮಿ.
  • ಸಂಸಾರವೆಂಬುದು ಗಾಳಿಯ ಸೊಡರು; ಸಿರಿಯೆಂಬುದೊಂದು ಸಂತೆಯಮಂದಿ.
  • ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ.
  • ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ! ಅಂಬುಜಕ್ಕೆ ಭಾನುವಿನ ಉದಯದ ಚಿಂತೆ! ಭ್ರಮರಂಗೆ ಪರಿಮಳ ಬಂಡುಂಬ ಚಿಂತೆ! ನಮಗೆ ನಮ್ಮ ಕೂಡಲ ಸಂಗಮದೇವರ ನೆನೆವುದೇ ಚಿಂತೆ.
  • ಕಂಡ ಭಕ್ತರಿಗೆ ಕೈಮುಗಿವಾತನೇ ಭಕ್ತ! ಮೃದು ವಚನವೇ ಸಕಲ ಜಪಂಗಳಯ್ಯ!
  • ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದರೆ ನಿಲಬಾರದು.
  • ನೀನೊಲಿದರೆ ಕೊರಡು ಕೊನರುವುದಯ್ಯ, ನೀನೊಲಿದರೆ ಬರಡು ಹಯನಹುದಯ್ಯ.
  • ಭಕ್ತನು ಶಾಂತನಾಗಿರಬೇಕು.
  • ಮನೆ ನೋಡಾ ಬಡವರು, ಮನ ನೋಡಾ ಧೀರರು!
  • ಬೆದರದಿರು, ಬೆದರದಿರು; ಬೆದಕಿದೊಡೆ ಹುರುಳಿಲ್ಲ.
  • ತನು ನಿಮ್ಮದೆಂಬೆ, ಮನ ನಿಮ್ಮದೆಂಬೆ, ಧನ ನಿಮ್ಮದೆಂಬೆ.
  • ಎನ್ನ ತಪ್ಪು, ಅನಂತಕೋಟಿ, ನಿಮ್ಮಸೈರಣೆ ಲೆಕ್ಕವಿಲ್ಲ.
  • ಈ ಕೈಯ್ಯಲೆ ಸುಖವು; ಈ ಕೈಯ್ಯಲೇ ದುಃಖವು!
  • ಸುಖ ಬಂದರೆ ಪುಣ್ಯದ ಫಲವೆನ್ನು, ದುಃಖ ಬಂದರೆ ಪಾಪದ ಫಲವೆನ್ನು!
  • ಎಡದ ಕೈಯಲ್ಲಿ ಹಾಲ ಬಟ್ಟಲು, ಬಲದ ಕೈಯಲ್ಲಿ ಓಜುಗಟ್ಟಿಗೆ! ಅವಾಗ ಬಂದಾನೆಮ್ಮಯ್ಯ, ಬಡಿದು ಹಾಲು ಕುಡಿಸುವ ತಂದೆ!?

Post a Comment

0 Comments